ರೈತನ ಆರ್ಥಿಕ ಬೆಳೆ ನಾಶಕ್ಕೆ ಲಗ್ಗೆ ಇಟ್ಟ ಹುಳುಗಳು.

ಅರಕಲಗೂಡು ;- ರೈತನ ಆರ್ಥಿಕ ಬೆಳೆ ನಾಶಕ್ಕೆ ಲಗ್ಗೆ ಇಟ್ಟ ಹುಳುಗಳು.
ತಾಲ್ಲೂಕಿನಲ್ಲಿ ಬಹುತೇಕ ಆರ್ಥಿಕ ಬೆಳೆಗಳಾದ ಜೋಳ, ಆಲೂಗಡ್ಡೆ, ತಂಬಾಕು, ಪ್ರಮುಖ ಬೆಳೆಗಳಾಗಿವೆ. ಈ ಬೆಳೆಗಳನ್ನ ನಂಬಿಕೊಂಡು ತನ್ನ ವಾರ್ಷಿಕ ಆರ್ಥಿಕ ವ್ಯವಸ್ಥೆಯನ್ನ ಸರಿದೂಗಿಸಿಕೊಳ್ಳುತ್ತಿದ್ದ ರೈತನಿಗೆ ಬರಸಿಡಿಲು ಬಡಿದಂತೆ ಪ್ರಾರಂಭದಿಂದಲೇ ಮಳೆಯ ಕೊರತೆ ಮತ್ತು ಹುಳುಗಳ ಬಾದೆ ಅ„ಕವಾಗಿರುವುದರಿಂದ ಆತನ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. 
ಮರುಭೂಮಿ ಮಿಡತೆಗೆ ಆತಂಕ:- ತಾಲ್ಲೂಕಿನಲ್ಲಿ ರೈತರು ಶೇಕಡ 37 ರಷ್ಟು ಬೆಸಾಯವನ್ನ ಪೂರ್ಣಗೊಳಿಸಿದ್ದಾರೆ. ಇನ್ನುಳಿದ ಶೇಕಡ 63 ರಷ್ಟು ವ್ಯವಸಾಯ ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಾಲ ಸೋಲ ಮಾಡಿ ಭೂಮಿಯನ್ನ ನಂಬಿ ಬೆಳೆಗಳಿಗೆ ಮುಂದಾಗಿರುವ ರೈತನಿಗೆ ಕಳೆದ ಸಾಲಿನಿಂದಲೂ ಹುಳುಗಳ ವಿರುದ್ದ ಹೋರಾಟ ಮಾಡುವುದೇ ಆಗಿದೆ. ಈ ಬಾರಿಯೂ ಪ್ರಾರಂಭದಲ್ಲೆ ಹುಳುಗಳು ಕಾಣಿಸಿಕೊಂಡಿರುವುದು ರೈತನಲ್ಲಿ ಹಾಕಿದ ಬೆಳೆ ಎಲ್ಲಿ ಕೈಸೇರುವುದಿಲ್ಲವೋ ಎಂಬ ಆತಂಕದಲ್ಲಿ ರೈತನು ಚಿಂತೆಗೆ ಒಳಗಾಗಿದ್ದಾನೆ. ಇದರೊಂದಿಗೆ ಕೆಲ ರಾಜ್ಯ ಮತ್ತು ಕೆಲ ಜಿಲ್ಲೆಗಳಲ್ಲಿ ಮರುಭೂಮಿ ಮಿಡತೆಯ ದಾಳಿಯ ಬಗ್ಗೆ ಮಾಧ್ಯಮಗಳಲ್ಲಿ ಕಂಡು ಇನ್ನು ಭಯಬೀತನಾಗಿದ್ದಾನೆ. ಇವರ ಸಂಕಷ್ಠಕ್ಕೆ ರಾಜ್ಯ ಸರ್ಕಾರ ನಿಲ್ಲದಿದ್ದರೆ, ರೈತನ ಪಾಡು ಅದೋಗತಿಗೆ ತಲುಪುತ್ತದೆ. 
ಹೆಳಿಕೆ:- ರಮೇಶ ಕುಮಾರ ಸಹಾಯಕ ಕೃಷಿ ನಿರ್ಧೇಶಕ ಅರಕಲಗೂಡು:- ತಾಲ್ಲೂಕಿನಲ್ಲಿ ಈ ಸಾಲಿನಲ್ಲಿ 45,715 ಹೆಕ್ಟೇರ ಪ್ರದೇಶದಲ್ಲಿ ಕೃಷಿಯ ಗುರಿಯನ್ನ ಹೊಂದಲಾಗಿದ್ದು, ಈಗಾಗಲೇ ಶೇಕಡ 37 ರಷ್ಟು ಬಿತ್ತನೆಯಾಗಿದೆ. ಮಳೆ ಈಗ ಪ್ರಾರಂಭವಾಗಿರುವುದರಿಂದ ಕೃಷಿ ಚಟುವಟಿಕೆ ಬಿರುಸಿನಿಂದ ಕೂಡಿದ್ದು, ವಾರದೊಳಗೆ ಬಿತ್ತನೆ ಕಾರ್ಯ ಮುಗಿಯಲಿದೆ. ಈಗಾಗಲೇ ಜೋಗ 8200 ಹೆಕ್ಟೇರ್ ಬಿತ್ತನೆಯಾಗಿದ್ದು, ಇನ್ನೂ 6500 ಹೆಕ್ಟೇರ ಬಾಕಿಯಿದೆ. ತಂಬಾಕು 6420 ಹೆಕ್ಟೇರ ಬಿತ್ತನೆಯಾಗಿದ್ದು, ಇನ್ನು 6000 ಹೆಕ್ಟೇರ ಬಾಕಿಯಿದೆ. ದ್ವಿದಳ ದಾನ್ಯ 1970 ಹೆಕ್ಟೇರ ಪ್ರದೇಶದಲ್ಲಿ ಇದ್ದು, ನೆಲೆಗಡಲೆ ಕಾಯಿ 180 ಹೆಕ್ಟೇರನಲ್ಲಿ ಬೆಳೆಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜೋಳಗಳಿಗೆ ಹುಳುಗಳು ಕಂಡು ಬಂದಿದ್ದು, ಇದರ ಬಗ್ಗೆ ಮುಂಜಾಗ್ರತ ಕ್ರಮ ತೆಗೆದುಕೊಂಡು ಈಗಾಗಲೇ ವಿಜ್ಞಾನಿಗಳೊಂದಿಗೆ ಚರ್ಚಿಸಿ ಸೂಕ್ತ ಔಷಧಗಳನ್ನು ಒದಗಿಸುವ ಮೂಲಕ ಹುಳುಗಳನ್ನ ನಾಶಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಬೇರೆ ರಾಜ್ಯಗಳಲ್ಲಿ ಮತ್ತು ಕೆಲ ಜಿಲ್ಲೆಗಳಲ್ಲಿ ಕಂಡು ಬಂದಿರುವ ಮರುಭೂಮಿ ಮಿಡತೆಯು ನಮ್ಮಲ್ಲಿ ಕಂಡುಬಂದಿರುವುದಿಲ್ಲ, ಹಾಗಾಗಿ ರೈತರು ಆತಂಕ ಪಡುವಂತಿಲ್ಲ ಎಂದು ತಿಳಿಸಿದರು. 


No comments:

Post a Comment